ಮಡಿಕೇರಿ,ಫೆ. 27: ಕೇರಳದಲ್ಲಿ ಆರ್.ಎಸ್.ಎಸ್, ಎ.ಬಿ.ವಿ.ಪಿ., ಬಿ.ಎಂ.ಎಸ್. ಹಾಗೂ ಬಿ.ಜೆ.ಪಿ. ಮುಂತಾದ ರಾಷ್ಟ್ರೀಯ ಸಂಘಟನೆಗಳ ಸದಸ್ಯರ ಭೀಕರಹತ್ಯೆ, ಹಿಂಸಾಚಾರವನ್ನು ಖಂಡಿಸಿ ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ಸಂಘಟನೆ ಮಾರ್ಚ್ 1 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಲಿದೆ.

ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಕೇರಳದಲ್ಲಿನ ಈ ಹತ್ಯಾಕಾಂಡದಕುರಿತು ಮಾಹಿತಿ ಪಡೆದುಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವದು ಎಂದು ಸಂಘಟನೆಯ ಪ್ರಮುಖ ಚೆಕ್ಕೇರ ಮನು ತಿಳಿಸಿದ್ದಾರೆ.