ಗುಡ್ಡೆಹೊಸೂರು, ಫೆ. 27: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ನಿವಾಸಿ ಚಂದಪ್ಪ ಅವರ ಪುತ್ರ ಹಿಂದೂಪರ ಸಂಘಟನೆಯ ಸಕ್ರೀಯಾ ಕಾರ್ಯಕರ್ತನಾಗಿದ್ದು ಕಳೆದ ಆಗಸ್ಟ್‍ನಲ್ಲಿ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಆರ್.ಎಸ್.ಎಸ್. ಮತ್ತು ಸಂಘಪರಿವಾರದ ವತಿಯಿಂದ ಸುಮಾರು ರೂ. 8.30 ಲಕ್ಷ ಹಣದಲ್ಲಿ ಮನೆ ನಿರ್ಮಿಸಲು ಭೂಮಿ ಪೂಜೆ ನಡೆಸಲಾಯಿತು. ಪೂಜೆಯನ್ನು ಕುಶಾಲನಗರದ ಅರ್ಚಕ ಪರಮೇಶ್ವರ ಮತ್ತು ತಂಡದವರು ನಡೆಸಿದರು. ಈ ಸಂದÀರ್ಭ ಹಿಂದೂಪರ ಸಂಘಟನೆಯ ಮುಖಂಡರಾದ ಉಲ್ಲಾಸ್, ಭಾರತೀಶ್, ಕೆ.ಕೆ. ದಿನೇಶ್, ಸತೀಶ್.ಬಿ.ವಿ., ಸುಭಾಶ್, ನಾಣಿ, ಸಿ.ಪಿ.ಗೋಪಾಲ, ಪ್ರವೀಣ್, ಶಶಿ, ಎಂ.ಆರ್.ಉತ್ತಪ್ಪ, ಅರುಣ್ ಮತ್ತು ಕಾರ್ಯಕರ್ತರು ಹಾಜರಿದ್ದರು.