, ಫೆ.28 ಈಜಲು ತೆರಳಿದ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿದೆ. ಕಂಬಿಬಾಣೆ ಗ್ರಾಮದ ಗಿರೀಶ (23), ದುರ್ಗಾಪ್ರಸಾದ್ (22) ಮೃತಪಟ್ಟ ದುರ್ದೈವಿಗಳು.ಗಾರೆ ಕೆಲಸ ನಿರ್ವಹಿಸುತ್ತಿದ್ದ ನಾಲ್ಕು ಜನರ ತಂಡ ಬೈಕ್‍ಗಳಲ್ಲಿ ದುಬಾರೆಯ ಪ್ರವಾಸಿ ಕೇಂದ್ರಕ್ಕೆ ಆಗಮಿಸಿದ್ದು ನದಿಯಲ್ಲಿ ಈಜಲು ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದೆ.ದುಬಾರೆ ಪ್ರವಾಸಿ ಕೇಂದ್ರದ ಗುತ್ತಿಮಠ ಎಂಬಲ್ಲಿ ನದಿಗೆ ಇಳಿದ ಸಂದರ್ಭ ಇಬ್ಬರು ನೀರಿನಲ್ಲಿ ಮುಳುಗಿದ್ದು ಮಾಹಿತಿ ತಿಳಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.

ಮುಳುಗು ತಜ್ಞ ರಾಮಕೃಷ್ಣ ಕುಶಾಲನಗರದಿಂದ ತೆರಳಿ ಮೃತದೇಹಗಳನ್ನು ಹೊರತೆಗೆಯಲು ಸಹಕರಿಸಿದರು, ಮೃತ ಗಿರೀಶ ವಿವಾಹಿತನಾಗಿದ್ದು, ಪತ್ನಿಯನ್ನು ಅಗಲಿದ್ದಾನೆ, ದುರ್ಗಾಪ್ರಸಾದ್ ಅವಿವಾಹಿತನಾಗಿದ್ದು ಇಬ್ಬರು ರಜಾ ದಿನದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರೊಂದಿಗೆ ದುಬಾರೆಗೆ ಆಗಮಿಸಿರುವದಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಅಧಿಕಾರಿ ಜೆ.ಇ.ಮಹೇಶ್ ತಿಳಿಸಿದ್ದಾರೆ.

ಕುಶಾಲನಗರ ಠಾಣೆಯಲ್ಲಿ ಮೊಕ್ಕದ್ದಮೆ ದಾಖಲಾಗಿದೆ.