ಮಡಿಕೇರಿ, ಮಾ. 1: ಬಿರುನಾಣಿ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ದಡಾರ - ರುಬೆಲ್ಲಾ ಕಾಯಿಲೆಗೆ ಲಸಿಕೆ ಹಾಕಲಾಯಿತು. ಕಾರ್ಯಕ್ರಮ ಸ್ಥಳೀಯ ಗ್ರಾ.ಪಂ. ಸದಸ್ಯ ಕಾಯಪಂಡ ಸುನಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕವಿತಾ ಈ ಬಗ್ಗೆ ಮಾಹಿತಿ ನೀಡಿದರು. ಶಾಲೆಯ 60 ಮಕ್ಕಳು ಹಾಗೂ ಗ್ರಾಮದ ಇತರ ಮಕ್ಕಳಿಗೆ ಚುಚ್ಚುಮದ್ದು ನೀಡಲಾಯಿತು. ಮಕ್ಕಳಿಂದ ಈ ಬಗ್ಗೆ ಪ್ರಬಂಧ ಬರೆಸಲಾಯಿತು. ಗ್ರಾ.ಪಂ. ಸದಸ್ಯೆ ಮಲ್ಲಿಗೆ, ಮುಖ್ಯ ಶಿಕ್ಷಕಿ ದೇವಮ್ಮ, ಸಹ ಶಿಕ್ಷಕಿ ರಾಜೇಶ್ವರಿ, ಬಾಡಗರಕೇರಿ, ಗೆರಕೇರಿ, ಪೊರಾಡು ಗ್ರಾಮದ ಅಂಗನವಾಡಿ ಶಿಕ್ಷಕಿಯರು ಪಾಲ್ಗೊಂಡಿದ್ದರು.