ವೀರಾಜಪೇಟೆ, ಮಾ. 2: ಸರಕಾರದ ಅನುದಾನದ ಆದ್ಯತೆ ಮೇರೆ ಚೆಂಬೆಬೆಳ್ಳೂರು ಕ್ಷೇತ್ರದಲ್ಲಿ ಜನಪರ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವದು. ಗ್ರಾಮಗಳ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸ ಲಾಗುವದು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಹೇಳಿದರು.ಐಮಂಗಲ ಗ್ರಾಮದಿಂದ ಕುಂಡ್ರಂಡ ಐನ್‍ಮನೆಗೆ ಹೋಗುವ ಹೊಸ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ನಾಣಯ್ಯ ಮಾತನಾಡಿ, ಗ್ರಾಮ ಪಂಚಾಯಿತಿ ಗೊಳಪಡುವ ಎಲ್ಲಾ ಗ್ರಾಮಗಳಿಗೆ ತಾಲೂಕು ಪಂಚಾಯಿತಿಯಿಂದ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತಾಗ ಬೇಕು ಎಂದು ಹೇಳಿದರು.

ಐಮಂಗಲ ದೇವಸ್ಥಾನ ಸಮಿತಿ ಅಧ್ಯಕ್ಷ ಮೇಕತಂಡ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಗ್ರಾಮದ ಅಭಿವೃದ್ಧಿ ಕುರಿತು ಮಾತನಾಡಿದರು.

ಗ್ರಾಮಸ್ಥರ ಪರವಾಗಿ ಹಿರಿಯರಾದ ಮೇಕತಂಡ ಕಾವೇರಪ್ಪ ಮಾತನಾಡಿದರು. ಕುಂಡ್ರಂಡ ಪೆಮ್ಮಯ್ಯ ಸ್ವಾಗತಿಸಿ, ಶಿಲ್ಪಾ ಪೊನ್ನಪ್ಪ ವಂದಿಸಿದರು.