ಚೆಟ್ಟಳ್ಳಿ, ಮಾ. 2: ಕೊಡಗು ಜಿಲ್ಲಾ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ವಿ. ರಾಮ್‍ನಾಥ್ ಅವರನ್ನು ಮೈಸೂರಿನ ಭಾವಸಾರ ಕ್ಷತ್ರಿಯ ಗ್ರ್ಯಾಜುವೇಟ್ ಅಸೋಸಿಯೇಶನ್‍ನ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು.ಮೈಸೂರಿನ ಲಕ್ಷ್ಮಿ ಸಮಾಜ ಭೂಷಣ ಜಯರಾಮ್‍ರಾವ್ ಸಭಾಂಗಣದಲ್ಲಿ ನಡೆದ ಅಸೋಸಿಯೇಶನ್‍ನ 36ನೇ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ಸುಮಾರು ಆರೂವರೆ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಾರಿಗೆ ಅಧಿಕಾರಿ ಯಾಗಿ ಉತ್ತಮ ಸೇವೆ ಸಲ್ಲಿಸುತ್ತಿ ರುವ ರಾಮ್‍ನಾಥ್ ಅವರ ಸೇವೆ ಪರಿಗಣಿಸಿ ಇತ್ತೀಚೆಗೆ ಸರಕಾರ ಸರ್ವೋತ್ತಮ ಸೇವಾ ಪ್ರಶಸ್ತಿ ಯನ್ನು ನೀಡಿ ಗೌರವಿಸಿತ್ತು. ಈ ಪ್ರಶಸ್ತಿ ಸಾರಿಗೆ ಇಲಾಖೆಗೆ ದೊರೆತದ್ದು ಮೊದಲನೆಯದಾಗಿದೆ.

ಬೆಂಗಳೂರಿನ ಸಾರಿಗೆ ಕಮಿಷನರ್ ಕಚೇರಿಯಲ್ಲಿ, ಕೊಡಗು ಜಿಲ್ಲಾಡಳಿತ, ಜಿಲ್ಲಾ ಕಾವಲು ಪಡೆ ಹಾಗೂ ಬೆಂಗಳೂರಿನ ಆಲ್ ಇಂಡಿಯಾ ಭಾವಸಾರಕ್ಷತ್ರಿಯ ಅಸೋಸಿಯೇಶನ್ ವತಿಯಿಂದಲೂ ಗೌರವಿಸಲಾಯಿತು.