ಚೆಟ್ಟಳ್ಳಿ, ಮಾ. 2: ಚೆಟ್ಟಳ್ಳಿ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಬಿ. ಸುನಿತಾ ಮಂಜುನಾಥ್ ತಮ್ಮ ಅನುದಾನದಲ್ಲಿ ಬರುವ ಕೃಷಿ ಸುಣ್ಣವನ್ನು ಕೃಷಿ ಇಲಾಖೆಯ ಮುಖಾಂತರ ರಿಯಾಯಿತಿ ದರದಲ್ಲಿ ಚೆಟ್ಟಳ್ಳಿ ಗ್ರಾಮಕ್ಕೆ ತಂದು ರೈತರಿಗೆ ವಿತರಿಸಿದರು.ಈ ಸಂದರ್ಭ ಮಾತನಾಡಿದ ಅವರು, ಸರಕಾರದ ಅನುದಾನದಲ್ಲಿ ಸೌಲಭ್ಯವನ್ನು ಆದಷ್ಟು ಮಟ್ಟಿಗೆ ರೈತರಿಗೆ ಮುಟ್ಟಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗುವದೆಂದರು. ವಿತರಣೆ ಸಂದರ್ಭ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ. ವತ್ಸಲಾ, ಕಾಂಗೆಸ್ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ, ಕೃಷಿ ಇಲಾಖೆ ಅಧಿಕಾರಿ ಬೋಪಯ್ಯ, ಸಿ.ಇ. ತೀರ್ಥಕುಮಾರ್, ಪುತ್ತರಿರ ನವೀನ ಬಿದ್ದಪ್ಪ, ಕೆಚ್ಚೆಟ್ಟಿರ ಅಪ್ಪಯ್ಯ, ಕಾರ್ಯಪ್ಪ, ಕೊಂಬನ ಶೇಖರ್, ಸಿದ್ದಿಕಲ್ಲು ದಯಾ, ಝುಬೇರ್ ಮತ್ತಿತರರು ಹಾಜರಿದ್ದರು.