ವೀರಾಜಪೇಟೆ, ಮಾ. 2: ನಿನ್ನೆ ರಾತ್ರಿ ಇಲ್ಲಿಗೆ ಸಮೀಪದ ಬಾಳುಗೋಡು ಗ್ರಾಮದ ಮಿಟ್ಟು ಅಲಿಯಾಸ್ ಮೋಹನ್ ಎಂಬವರಿಗೆ ಒಂಟಿ ನಳಿಗೆ ಕೋವಿಯಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ಅನಿಲ್ ಇಂದು ಬೆಳಿಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಶರಣಾಗತನಾಗಿದ್ದಾನೆ.ಕೊಲೆ ಯತ್ನಕ್ಕೆ ಪ್ರಚೋದಿಸಿದ ಅನಿಲ್ ತಂದೆ ಜಯರಾಜ್ ಎಂಬಾತನನ್ನು ಪೊಲೀಸರು ಎರಡನೇ ಆರೋಪಿಯಾಗಿ ಪರಿಗಣಿಸಿ ಮೊಕದ್ದಮೆ ದಾಖಲಿಸಿದ್ದು, ಆತ ತಲೆ ಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.ಗ್ರಾಮಾಂತರ ಪೊಲೀಸರ ತಂಡ ಇಂದು ಜಯರಾಜ್ ಮನೆಗೆ ತೆರಳಿ ತನಿಖೆ ನಡೆಸಿದ್ದು ಕೊಲೆ ಯತ್ನಕ್ಕೆ ಬಳಸಿದ ಒಂಟಿ ನಳಿಗೆ ಕೋವಿಯನ್ನು ವಶ ಪಡಿಸಿಕೊಂಡಿದ್ದಾರೆ.

ವೀರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರು ಇಂದು ಘಟನೆ ನಡೆದ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ಪೊಲೀಸರ ತನಿಖೆ ಪ್ರಕಾರ ಎರಡು ಕುಟುಂಬಗಳ ನಡುವೆ ಆಸ್ತಿ ವೈಷಮ್ಯವಿದ್ದು ಕೊಲೆ ಯತ್ನಕ್ಕೆ ಕಾರಣ ಎಂದು ಗೊತ್ತಾಗಿದೆ.

ಗುಂಡೇಟಿನಿಂದ ಗಂಭೀರ ಸ್ವರೂಪದ ಗಾಯಗೊಂಡಿರುವ ಮೋಹನ್‍ನನ್ನು