ಮಡಿಕೇರಿ, ಮಾ:6. ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದ ಡಾ|| ಹೆಚ್.ಎಸ್.ಶಿವಕುಮಾರ್ ಅವರನ್ನು ಕರ್ತವ್ಯಲೋಪದ ಆರೋಪದಂತೆ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಹಾರ ಸುರಕ್ಷತಾ ಆಯುಕ್ತರಾದ, ಸುಭೋದ್ ಯಾದವ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ನಿಯಮ ಅನುಸರಿಸದೆ, ಕಾನೂನು ಬಾಹಿರವಾಗಿ ಆಯ್ಕೆ ಮಾಡಿರುವ ಆರೋಪದಂತೆ ಜಾಗೃತ ಕೋಶದ ಜಾಗೃತಾಧಿಕಾರಿಗಳು ತನಿಖಾ ವರದಿ ಸಲ್ಲಿಸಿದ್ದರು. ಇದರಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಆದೇಶ ಹೊರಡಿಸಲಾಗಿದೆ.

ಶಿವಕುಮಾರ್ ಈ ಹಿಂದೆ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಯಾಗಿದ್ದ ಸಂದರ್ಭ ಹಿಂದಿನ ಜಿ.ಪಂ. ಆಡಳಿತ ಇವರ ವಿರುದ್ಧ ದುರುಪಯೋಗದ ಜಾಗೃತಕೋಶಕ್ಕೆ ದೂರು ಸಲ್ಲಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.