ಮಡಿಕೇರಿ, ಮಾ. 6: ಚಿಕ್ಕಮುಂಡೂರು ಗ್ರಾಮದ ಭಗವತಿ ದೇವಸ್ಥಾನದ ಶ್ರೀ ಬೇಟೆ ತರುಂಬ ಈಶ್ವರ ಮತ್ತು ಚಾಮುಂಡಿ ದೇವರ ಪುನರ್ ಪ್ರತಿಷ್ಠಾಪನಾ ಪೂಜೆಯನ್ನು ವೀರಾಜಪೇಟೆಯ ಪುರೋಹಿತರಾದ ಪಂಡರೀಶ್ ಅರಳಿತಾಯ ಅವರು ತಾ. 8ರ ಸಂಜೆ 6.30ರಿಂದ ತಾ.9ರ ಗುರುವಾರ ಮಧ್ಯಾಹ್ನದವರೆಗೆ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.