ಮಾನ್ಯರೆ,

ಮಡಿಕೇರಿ ನಗರಸಭೆ ವತಿಯಿಂದ ರಾಜಾಸೀಟ್ ಮುಂಭಾಗ ವಾಹನಗಳ ಪಾರ್ಕಿಂಗ್‍ಗೆ ನಿಗದಿ ಆಗಿರುವ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಇಂಟರ್‍ಲಾಕ್ ಅಳವಡಿಸುತ್ತಿರುವದು ಖಂಡನೀಯ. ಇಲ್ಲಿ ಇಂಟರ್‍ಲಾಕ್ ಅಳವಡಿಸಿ ಯಾವ ಪ್ರಯೋಜನ. ಇದರ ಮೇಲೆ ಪಾದಾಚಾರಿಗಳು ನಡೆದಾಡುವ ಪ್ರಮೇಯವೇ ಬರುವದಿಲ್ಲ. ಕಾರಣ, ರಾಜಾಸೀಟ್‍ನಿಂದ ಹಿಡಿದು ಕಾಫಿ ಕೃಪ ಕಟ್ಟಡದವರೆಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದ್ದು, ಈ ಪಾರ್ಕಿಂಗ್ ವ್ಯವಸ್ಥೆಯ ಗುತ್ತಿಗೆ ಪಡೆದ ವ್ಯಕ್ತಿಯನ್ನು ಸಂತೋಷಗೊಳಿಸಲು ಈ ವಿಭಾಗದಿಂದ ಆಯ್ಕೆಯಾಗಿ ನಗರಸಭೆಯ ಆಡಳಿತ ಮಂಡಳಿಯ ಅಧಿಕಾರ ಹಿಡಿದಿರುವ ಸದಸ್ಯನೊಬ್ಬನ ಸ್ವಾರ್ಥಕ್ಕಾಗಿ ಲಕ್ಷಾಂತರ ರೂಪಾಯಿ ದುಂದುವೆಚ್ಚ ನಡೆಯುತ್ತಿದೆ. ಈ ಕಾಮಗಾರಿಗಳ ಬಗ್ಗೆ ಶೀಘ್ರ ತನಿಖೆಯಾಗಬೇಕು. ಜನತೆಗೆ ಉಪಯೋಗವಿಲ್ಲದ ಒಂದಿಬ್ಬರಿಗಾಗಿ ಇಂಟರ್‍ಲಾಕ್ ಅಳವಡಿಸುವದು ಖಂಡನೀಯ.

- ಲೋಕೇಶ್, ಮಡಿಕೇರಿ.