ಸೋಮವಾರಪೇಟೆ, ಮಾ. 6: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ 5ವರ್ಷಗಳ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೋಮವಾರಪೇಟೆಯ ಪ್ರಮುಖ ಪತ್ರಿಕಾ ಏಜೆಂಟ್, ಬಾಣಾವರ ರಸ್ತೆ ನಿವಾಸಿ ಬಿ.ಪಿ. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬಿ.ಪಿ. ಶಿವಕುಮಾರ್ ಅವರು ಅಧ್ಯಕ್ಷರಾಗಿ, ಪವರ್‍ಹೌಸ್ ರಸ್ತೆಯ ನಿವಾಸಿ ಬಿ.ಎಂ. ರಾಮ್‍ಪ್ರಸಾದ್ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇದರೊಂದಿಗೆ ಶ್ರೀಕಾಂತ್, ಬಿ.ಡಿ. ಮಂಜುನಾಥ್, ಹೆಚ್.ಕೆ. ಮಾದಪ್ಪ, ಎಂ.ಸಿ. ರಾಘವ, ಬಿ.ಆರ್. ಮೃತ್ಯುಂಜಯ, ಜಿ.ಎ. ಉದಯ, ಎನ್.ಟಿ. ಪರಮೇಶ್, ಹೆಚ್.ಎಸ್. ವೆಂಕಪ್ಪ, ಬಿ.ಶಿವಪ್ಪ, ಕೆ.ಆರ್. ದಿವ್ಯ, ಶೋಭಾ ಶಿವರಾಜ್, ವರಲಕ್ಷ್ಮೀ ಸಿದ್ದೇಶ್ವರ್, ಕೆ.ಬಿ. ಸುರೇಶ್ ಅವರುಗಳು ಆಡಳಿತ ಮಂಡಳಿ ಸದಸ್ಯರುಗಳಾಗಿ ನೇಮಕಗೊಂಡರು. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಮೋಹನ್ ಅವರು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ಶಿವಕುಮಾರ್ ಅವರು ಕಳೆದ ಎರಡು ದಶಕಗಳಿಂದ ಸೋ.ಪೇಟೆ ಭಾಗದ ‘ಶಕ್ತಿ’ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ.