ಸೋಮವಾರಪೇಟೆ, ಮಾ. 5: ಬರಪರಿಸ್ಥಿತಿ ಹಿನ್ನೆಲೆ ಈಗಾಗಲೇ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಇದನ್ನು ತಡೆಗಟ್ಟಲು ಜಿ.ಪಂ.ನಿಂದ ಅಗತ್ಯವಿರುವೆಡೆಗಳಲ್ಲಿ ನೂತನ ಬೋರ್‍ವೆಲ್ ಕೊರೆಸುವ ಕಾರ್ಯ ನಡೆಯುತ್ತಿದೆ. ಅಬ್ಬೂರುಕಟ್ಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಬೋರ್‍ವೆಲ್ ಕೊರೆಯುವ ಕಾಮಗಾರಿ ಪ್ರಗತಿಯಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಸಜ್ಜಳ್ಳಿ ಹಾಡಿಯಲ್ಲಿ ನೂತನ ಬೋರ್‍ವೆಲ್ ಕೊರೆಸಲಾಗಿತ್ತು. ಇದೀಗ ನೇಗಳ್ಳೆ ಮತ್ತು ಮದಲಾಪುರದಲ್ಲಿಯೂ ಬೋರ್‍ವೆಲ್ ಕೊರೆಸಲಾಗಿದ್ದು. ಎರಡೂ ಕಡೆಗಳಲ್ಲಿ ನಿರೀಕ್ಷೆಗೂ ಮೀರಿ ನೀರು ದೊರೆತಿದೆ. ಜಿ.ಪಂ.ನಿಂದ ತಲಾ ಒಂದು ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಪೈಪ್‍ಲೈನ್ ಕಾಮಗಾರಿಗೆ ಹೆಚ್ಚುವರಿ ಅನುದಾನ ನೀಡಲಾಗುವದು ಎಂದು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ತಿಳಿಸಿದ್ದಾರೆ.