ಬೆಂಗಳೂರು, ಮಾ. 7 : ಕೊಡಗು ತಂಡದ ‘ಆರುಂಧತಿ ಆಲಾಪ’ ನಾಟಕ ಇದೀಗ ‘ರಾಜ್ಯ ಮಹಿಳಾ ದಿನಾಚರಣೆ’ಯಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಗೊಂಡಿದೆ. ತಾ. 8 ರಂದು (ಇಂದು) ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿರುವ ಈ ಕಾರ್ಯಕ್ರಮ ದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಪಾಲ್ಗೊಳ್ಳಲಿದ್ದಾರೆ.

ಹೆಣ್ಣೊಬ್ಬಳ ಭಾವನಾ ಪ್ರಪಂಚದ ಕಥೆಯಿರುವ ಈ ನಾಟಕವನ್ನು ಕೊಡಗಿನ ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಿರ್ದೇಶಿಸಿದ್ದಾರೆ. ಈ ನಾಟಕವನ್ನು ಮೈಸೂರು ರಂಗಾಯಣದ ಎಸ್. ರಾಮನಾಥ್ ರಚಿಸಿದ್ದಾರೆ. ವೀರಾಜಪೇಟೆ ಕಾವೇರಿ ಕಾಲೇಜಿನ ವಿಧ್ಯಾರ್ಥಿ ಕಲಾವಿದರ ಸಹಕಾರದೊಂದಿಗೆ ರೂಪು ಗೊಂಡಿರುವ ಈ ನಾಟಕದಲ್ಲಿ ಕೊಡಗಿನ ಹಿರಿಯ ರಂಗನಟಿ ಅನಿತಾ ಕಾರ್ಯಪ್ಪ ಅವರೊಂದಿಗೆ ಹಲವು ಪ್ರತಿಭೆಗಳು ಪಾಲ್ಗೊಳ್ಳುತ್ತಿವೆ.