ಮಡಿಕೇರಿ, ಮಾ. 7: ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ವಾಸವಿದ್ದ ಕೊಡಗು ಪ್ರಗತಿಪರ ಸಂಘದ ಅಧ್ಯಕ್ಷ ಕೊತ್ತೋಳಿ ಅಪ್ಪಯ್ಯ (47) ಇಂದು ತಮ್ಮ ಮನೆಯಲ್ಲಿ ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.ಸಂಜೆ 6.30ರ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಪ್ಪಯ್ಯ ಎದೆಗೆ ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಪತ್ನಿ ಸ್ವಗ್ರಾಮ ಕಾರುಗುಂದಕ್ಕೆ ತೆರಳಿದ್ದು, ಪುತ್ರ ಮನೆಯಿಂದ ಹೊರ ಹೋಗಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಅಪ್ಪಯ್ಯ ಸರಕಾರಿ ಜಾಗ ಅತಿಕ್ರಮಿಸಿ ಕೊಂಡು ಮನೆ ನಿರ್ಮಿಸಿಕೊಂಡಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯವರು ಅಪ್ಪಯ್ಯ ಅವರು ವಾಸವಿದ್ದ

ಮನೆಯನ್ನು ಇತ್ತೀಚೆಗೆ ತೆರವುಗೊಳಿಸಿದ್ದರು. ಇದಾದ ಬಳಿಕ ಅಪ್ಪಯ್ಯ ಅಲ್ಲಿಯೇ ಶೆಡ್ ನಿರ್ಮಿಸಿಕೊಂಡು ವಾಸವಿದ್ದು, ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಪ್ಪಯ್ಯ ಪ್ರಗತಿಪರ ಸಂಘದ ಮೂಲಕ ಮಾಜಿ ಸೈನಿಕರಿಗೆ ನಿವೇಶನ ಒದಗಿಸಿಕೊಡುವ ನಿಟ್ಟಿನಲ್ಲಿ ಸಂಘಟನೆ ಮಾಡಿಕೊಂಡು ಹೋರಾಟ ನಡೆಸಿದ್ದರು.