ಮಡಿಕೇರಿ, ಮಾ. 7: ಕೊಡಗು ಜಿಲ್ಲಾ ಪ್ರವಾಸಿ ವಾಹನ ಚಾಲಕರು - ಮಾಲೀಕರ ಸಂಘದ ಮಹಾಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಕುಳಿಯಕಂಡ ಸಂಪತ್, ಉಪಾಧ್ಯಕ್ಷರಾಗಿ ಸಿ.ಎಸ್. ಪ್ರದೀಪ್‍ಕುಮಾರ್ ಹಾಗೂ ಎಂ.ಎ. ರಫೀಕ್, ಕಾರ್ಯದರ್ಶಿ ಪಿ.ಸಿ. ರಾಜು, ಉಪಕಾರ್ಯದರ್ಶಿ ಎಂ.ಬಿ. ಉಮೇಶ್, ಖಜಾಂಚಿಯಾಗಿ ಕುಪ್ಪಂಡ ವಸಂತ್, ಸಹ ಖಜಾಂಚಿಯಾಗಿ ವಿ. ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಚೆಯ್ಯಂಡ ಸತ್ಯ, ಕಾನೂನು ಸಲಹೆಗಾರರಾಗಿ ಮಡಿಕೇರಿ ವಕೀಲ ಸಜನ್‍ಕುಮಾರ್, ಸಲಹೆಗಾರರಾಗಿ ಬಿ.ವಿ. ರವಿ, ನಿರ್ದೇಶಕರಾಗಿ ಟಿ.ಕೆ. ಮಧು, ಆಂಟೋನಿ, ಗಣೇಶ್, ಕುಮಾರ್, ಚೇತನ್, ವಿರೂಪಾಕ್ಷ, ರಮೇಶ್, ಮಹೇಶ್, ಮನ್ಸೂರ್, ರೋನಿ, ವಿ.ಕೆ. ಪ್ರಭಾಕರ್ ರಖೀಬ್ ನೇಮಕಗೊಂಡಿದ್ದಾರೆ.