ಸೋಮವಾರಪೇಟೆ, ಮಾ. 7: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜಿಲ್ಲಾಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಯನ್ನು ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿನಿ ರವೀನಾ ಧರ್ಮಪ್ಪ ಪಡೆದಿದ್ದಾರೆ.

ಸಾಂಸ್ಕøತಿಕ ಕ್ಷೇತ್ರದಲ್ಲಿ ಮಾಡಿರುವ ಅಸಾಧಾರಣ ಸಾಧನೆಯನ್ನು ಗುರುತಿಸಿ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2016 ಮತ್ತು 17ನೇ ಸಾಲಿನಲ್ಲಿ ರವೀನಾ ಅವರಿಗೆ ಪ್ರಶಸ್ತಿ ಮತ್ತು ರೂ. 10 ಸಾವಿರ ನಗದು ಬಹುಮಾನ ನೀಡಿದೆ. ಈಕೆ ಸೋಮವಾರಪೇಟೆಯ ವಕೀಲರಾದ ಹೆಚ್.ಆರ್. ಪವಿತ್ರ ಮತ್ತು ಪಿ.ಪಿ. ಧರ್ಮಪ್ಪ ಅವರ ಪುತ್ರಿ.