ಸಿದ್ದಾಪುರ, ಮಾ. 7: ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ಹಾಗೂ ತಾ.ಪಂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ಶೋಭಾ, ಗ್ರಾ.ಪಂ. ಸದಸ್ಯರಾದ ಚೆಲ್ಲವಂಡ ಕಾವೇರಪ್ಪ, ಐನಂಡ ಪ್ರತಾಪ್, ವಸಂತಿ, ಹೆಚ್. ಪ್ರವೀಣ್, ಸುಕುಮ, ಪಿ.ಡಿ.ಓ. ಪ್ರಮೋದ್ ಗ್ರಾಮಸ್ಥರಾದ ಸುಲೈಮಾನ್, ಯೋಗೇಶ್, ಮುಸ್ತಫ, ಅರುಣ್, ಗಣಪತಿ, ಲವ, ಹ್ಯಾರೀಸ್ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.