*ಗೋಣಿಕೊಪ್ಪಲು, ಮಾ. 8: ರಾಷ್ಟ್ರೀಯ ದಡಾರ, ರುಬೇಲ್ಲಾ ರೋಗ ಲಸಿಕಾ ಅಭಿಯಾನಕ್ಕೆ ಟಿ. ಶೆಟ್ಟಿಗೇರಿ ಅಂಗನವಾಡಿ ಉಪಕೇಂದ್ರದಲ್ಲಿ ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಚಾಲನೆ ನೀಡಿದರು.

ಸ್ಥಳೀಯ ಅಂಗನವಾಡಿ ಮತ್ತು ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚುಚ್ಚುಮದ್ದನ್ನು ನೀಡಲಾಯಿತು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಎ. ಕಾವೇರಮ್ಮ, ಆಶಾ ಕಾರ್ಯಕರ್ತರುಗಳಾದ ಎಂ.ಟಿ. ವೀಣಾ, ಎಂ.ಡಿ. ಶೀಲಾ, ಟಿ.ಆರ್. ಲಕ್ಷ್ಮಿ, ಹೆಚ್.ಪಿ. ಕಮಲಾ, ಕೆ.ಆರ್. ಗೀತಾ, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ, ಜ್ಯೋತಿ ಹಾಜರಿದ್ದರು.