ಮಡಿಕೇರಿ, ಮಾ. 8: ಪೆರಾಜೆಯ ಗೌಡ ಗ್ರಾಮ ಸಮಿತಿ ವತಿಯಿಂದ ಗೌಡ ಕಪ್ ಕ್ರಿಕೆಟ್ ಹಬ್ಬ ತಾ. 28 ರಿಂದ ಏಪ್ರಿಲ್ 5 ರವರೆಗೆ ಪೆರಾಜೆಯಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾ ಸಮಿತಿಯ ಸಹ ಸಂಚಾಲಕ ಮನೋಜ್ ನಿಡ್ಯಮಲೆ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಕೊಡಗು ಮತ್ತು ದಕ್ಷಿಣ ಕÀನ್ನಡ ಜಿಲ್ಲಾ ಗೌಡ ಕುಟುಂಬಗಳ ನಿಗದಿತ ಓವರ್‍ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಯನ್ನು 64 ಕುಟುಂಬ ತಂಡಗಳಿಗೆ ಸೀಮಿತಗೊಳಿಸಲಾಗಿದೆ. ನಾಲ್ಕನೇ ವರ್ಷದ ಪಂದ್ಯಾವಳಿ ಇದಾಗಿದ್ದು, ಗೌಡ ಕುಟುಂಬಗಳ ಪರಸ್ಪರ ಪರಿಚಯ ಮತ್ತು ಸಾಮರಸ್ಯಕ್ಕಾಗಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಕಳೆದ ವರ್ಷ ಶ್ರೀ ಶಾಸ್ತಾವು ದೇವಸ್ಥಾನದ ನವೀಕರಣ ಹಿನ್ನೆಲೆ ಯಲ್ಲಿ ಪಂದ್ಯಾವಳಿಯನ್ನು ನಡೆಸಿರಲಿಲ್ಲ. ಈ ಬಾರಿ ಅದ್ಧೂರಿ ಯಾಗಿ ಕ್ರಿಕೆಟ್ ಹಬ್ಬವನ್ನು ನಡೆಸಲು ನಿರ್ಧರಿಸಲಾಗಿದ್ದು, ತಂಡಗಳ ನೋಂದಾವಣೆಗೆ ತಾ. 20 ಕೊನೆಯ ದಿನವಾಗಿದೆ. ತಾ. 23 ರಂದು ಟೈಸ್ ತೆಗೆಯಲಾಗುತ್ತದೆ ಎಂದರು.

ಪೆÀರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೋತ್ಸವ ನಡೆಯುವದರಿಂದ ಸೀಮಿತ ದಿನಗಳ ಒಳಗಾಗಿ ಪಂದ್ಯಾವಳಿ ಮುಗಿಸ ಬೇಕಾಗಿದೆ. ಆದ್ದರಿಂದ ಮೊದಲು ಹೆಸರು ನೋಂದಾಯಿಸಿಕೊಳ್ಳುವ 64 ಕುಟುಂಬಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸ ಲಾಗಿದೆ. ಎರಡು ವರ್ಷಗಳ ಹಿಂದೆ 68 ತಂಡಗಳು ಪಾಲ್ಗೊಂಡಿದ್ದು, ಗೌಡ ಕುಟುಂಬಗಳಿಗೆ ಮಾತ್ರ ಈ ಕ್ರಿಕೆಟ್ ಹಬ್ಬ ಸೀಮಿತವಾಗಿದೆ. ನೋಂದಾವಣೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಮೈದಾನ ಶುಲ್ಕ 1500 ರೂ. ಗಳಾಗಿದ್ದು, ಆಟಗಾರರು ಸಮವಸ್ತ್ರ ದೊಂದಿಗೆ ಶಿಸ್ತನ್ನು ಪಾಲಿಸಬೇಕೆಂದು ಮನೋಜ್ ನಿಡ್ಯಮಲೆ ತಿಳಿಸಿದರು. ವಿಜೇತ ತಂಡಗಳಿಗೆ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುವದು. ತಂಡಗಳ ನಡುವೆ ಸಮಬಲ ಏರ್ಪಟ್ಟರೆ ಸೂಪರ್ ಬಾಲ್ ಮೂಲಕ ಗೆಲುವನ್ನು ನಿಶ್ಚಯಿಸ ಲಾಗುವದು. ತಂಡಗಳು ನೋಂದಾಯಿಸಿಕೊಳ್ಳಬೇಕಾದ ದೂರವಾಣಿ ಸಂಖ್ಯೆ-944555303, 9482849796, 9449893970.