ವೀರಾಜಪೇಟೆ, ಮಾ: 8: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲವು ಧೋರಣೆಗಳನ್ನು ಖಂಡಿಸಿ ಮೂಲಭೂತ ಬೇಡಿಕೆಗಳಿಗೆ ಒತ್ತಾಯಿಸಿ ತಾ. 10 ರಂದು ತಾಲೂಕು ಕಚೇರಿ ಎದುರು ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಸಿಪಿಐನ ಜಿಲ್ಲಾ ಕಾರ್ಯದರ್ಶಿ ಹೆಚ್.ಡಿ. ರಮೇಶ್ ಮಾಯಮುಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಕರ ಬರಗಾಲದಿಂದ ಬಸವಳಿದ ರೈತರ ಸಾಲ ಮನ್ನಾ ಬೆಳೆ ನಷ್ಟ ಪರಿಹಾರಕ್ಕಾಗಿ ಜಿಲ್ಲೆಯ ಎಲ್ಲಾ ನಿರ್ಗತಿಕ, ಆದಿವಾಸಿ ಮತ್ತು ದಲಿತ ನಿವೇಶನ ರಹಿತರಿಗೆ 15 ದಿನದೊಳಗೆ ನಿವೇಶನ ನೀಡಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ಮಾಡುವದಾಗಿ ಅವರು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಆದಿವಾಸಿ ಮಹಾಸಭಾದ ಜಿಲ್ಲಾ ನಿರ್ದೇಶಕ ಪಿ.ಎಸ್. ಮುತ್ತ, ತಾಲೂಕು ಅಧ್ಯಕ್ಷ ಪಿ.ಕೆ. ಸುಬ್ಬ, ಪಿ.ಆರ್. ಸರಿತಾ ಉಪಸ್ಥಿತರಿದ್ದರು.