ಮಡಿಕೇರಿ, ಮಾ. 9 : ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿಯಿಂದ ಇಂದಿನಿಂದ ರಾಜ್ಯದೆಲ್ಲೆಡೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪ್ರಾರಂಭ ಗೊಂಡಿದ್ದು, ಜಿಲ್ಲೆಯ 16 ಕೇಂದ್ರಗಳಲ್ಲಿ ಒಟ್ಟು 6524 ಮಂದಿಯ ಪೈಕಿ 62 ಮಂದಿ ಹೊರತಾಗಿ ಉಳಿದವರು ಪರೀಕ್ಷೆ ಬರೆದಿದ್ದಾರೆ ಎಂದು ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ಸ್ವಾಮಿ ಅವರು ಖಚಿತಪಡಿಸಿದ್ದಾರೆ.

ಪರೀಕ್ಷೆಗೆ ಗೈರಾದ 62 ಮಂದಿಯ ಪೈಕಿ ವಿಜ್ಞಾನ ಪರೀಕ್ಷೆಗೆ 16 ಹಾಗೂ ಇತಿಹಾಸದಲ್ಲಿ 46 ಮಂದಿ ಬರೆದಿಲ್ಲ. ಬಹುತೇಕ ಇವರೆಲ್ಲ ಖಾಸಗಿಯಾಗಿ ಪರೀಕ್ಷೆ ಕಟ್ಟಿದ್ದವರಾಗಿದ್ದಾರೆ.

ಪರೀಕ್ಷೆಗೆ ಎಲ್ಲೆಡೆ ಭದ್ರತಾ ವ್ಯವಸ್ಥೆಯೊಂದಿಗೆ ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ 5 ತಂಡಗಳಲ್ಲಿ ನಿಗಾ ವಹಿಸಲಾಗಿತ್ತು.

ಇಂದಿನ ಪರೀಕ್ಷೆ : ತಾ. 10ರಂದು (ಇಂದು) ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ಪರೀಕ್ಷೆ ನಡೆಯಲಿದೆ.