*ಸಿದ್ದಾಪುರ, ಮಾ. 11: ವಾಲ್ನೂರು ತ್ಯಾಗತ್ತೂರು ಗ್ರಾಮದ ಶ್ರೀ ಬಸವೇಶ್ವರ, ಶ್ರೀ ರಾಮ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ವಾರ್ಷಿಕ ಉತ್ಸವವವು ತಾ. 12 ರಿಂದ (ಇಂದಿನಿಂದ) 14ರ ವರೆಗೆ ನಡೆಯಲಿದೆ. ಇಂದು ರಾತ್ರಿ 8 ಗಂಟೆಗೆ ಕದಳಿ ಕಟ್ಟುವದರೊಂದಿಗೆ ಪೂಜಾ ಕಾರ್ಯಗಳು ಪ್ರಾರಂಭಗೊಳ್ಳಲಿದೆ. ಸೋಮವಾರದಂದು ಶ್ರೀ ಮಹದೇಶ್ವರ ಸ್ವಾಮಿ ಪರ್ವ, ಮಹಾಪೂಜೆ, ಮೆರೆಯುವ ಬಸವಣ್ಣ ಹಾಗೂ ಮಹಾಪೂಜೆ ನಡೆಯಲಿದೆ. ಮಂಗಳವಾರದಂದು ಸಾಮೂಹಿಕ ಭೋಜನ, ಕೊಂಡ ಹಾಯುವದು ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.