*ಗೋಣಿಕೊಪ್ಪಲು, ಮಾ. 12: ಜಿ.ಪಂ. ಅನುದಾನದ 8.60 ಲಕ್ಷ ರೂಪಾಯಿಗಳಲ್ಲಿ ವಿವಿಧ ಕಾಮಗಾರಿಗಳಿಗೆ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಭೂಮಿ ಪೂಜೆ ನೆರವೇರಿಸಿದರು.

ಅತ್ತೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಕೆರೆ ಅಭಿವೃದ್ಧಿಗೆ ರೂ. 2.60 ಲಕ್ಷ, ಅತ್ತೂರು ಪ್ರಾಥಮಿಕ ಶಾಲೆಗೆ ಇಂಟರ್‍ಲಾಕ್ ಅಳವಡಿಕೆಗೆ ರೂ. 2 ಲಕ್ಷ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಪೈಪ್‍ಲೈನ್ ಮತ್ತು ಮೋಟಾರ್ ಅಳವಡಿಕೆಗೆ ರೂ. 2 ಲಕ್ಷ, ಅರುವತ್ತೋಕ್ಲು ಕೊಳವೆ ಬಾವಿ ತೋಡಲು ರೂ. 2 ಲಕ್ಷ ರೂಪಾಯಿಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಜಿ.ಪಂ. ಅನುದಾನವನ್ನು ಸಮರ್ಪಕವಾಗಿ ಬಳಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಲಾಗುವದು. ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಪಂಚಾಯಿತಿ ಅಧ್ಯಕ್ಷರ ಹಾಗೂ ಸದಸ್ಯರ, ಸಾರ್ವಜನಿಕರ ಬೆಂಬಲ ಅಗತ್ಯ ಎಂದು ಸಿ.ಕೆ. ಬೋಪಣ್ಣ ಹೇಳಿದರು.

ಈ ಸಂದÀರ್ಭ ಹಾತೂರು ಅಧ್ಯಕ್ಷೆ ಆಶಾಲತಾ, ಸದಸ್ಯ ಕುಲ್ಲಚಂಡ ಚಿಣ್ಣಪ್ಪ, ಮ್ಯಾಥ್ಯು ಸುಭಾಷ್, ಆರ್. ಸಾವಿತ್ರಮ್ಮ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ರಾಮಕೃಷ್ಣ ಭಟ್, ಸ್ಥಳ ದಾನಿಗಳಾದ ಸಣ್ಣುವಂಡ ಕಿಶೋರ್ ಮಾಚಯ್ಯ, ರತ್ನ ಸುಬ್ಬಯ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ಮತ್ತು ಸಹ ಶಿಕ್ಷಕರು ಹಾಜರಿದ್ದರು.