ಸುಂಟಿಕೊಪ್ಪ, ಮಾ.12: ಉತ್ತರ ಪ್ರದೇಶ ಮತ್ತು ಉತ್ತರಖಂಡ್ ನಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಂತ ಬಹುಮತದಿಂದ ಜಯ ಗಳಿಸಿದ ಹಿನ್ನೇಲೆಯಲ್ಲಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಘೋಷಣೆ ಕೂಗಿ ಪಠಾಕಿ ಸಿಡಿಸಿ ವಿಜಯೋತ್ಸವದೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ರಸ್ತೆಯನ್ನು ಸ್ವಚ್ಛ ಗೊಳಿಸಿ ಸ್ವಚ್ಚಭಾರತಕ್ಕೆ ನಾಂದಿ ಯಾದರು. ಈ ಸಂದರ್ಭ ಸುಂಟಿಕೊಪ್ಪ ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಯುವ ಮೋರ್ಚಾ ನಗರಾಧ್ಯಕ್ಷ ರಂಜಿತ್ ಪೂಜಾರಿ, ಉಪಾಧ್ಯಕ್ಷ ಹರೀಶ್, ಮಾಜಿ ನಗರಾಧ್ಯಕ್ಷ ಬಿ.ಕೆ.ಮೋಹನ್, ಗ್ರಾ.ಪಂ.ಸದಸ್ಯರುಗಳಾದ ಸಿ.ಚಂದ್ರ, ಜ್ಯೋತಿ ಬಾಸ್ಕರ್, ಕಾರ್ಯಕರ್ತರು ಗಳಾದ ವಿನೋದ್, ರಮೇಶ್ ರೈ, ರಾಕೇಶ್ ಕುಮಾರ್,ಶಶಿ ಇತರರು ಇದ್ದರು.