ಗೋಣಿಕೊಪ್ಪಲು, ಮಾ. 12: ಗೋವಾ ರಾಜ್ಯದ ಸಂಸದ ಶಾಂತರಾಮ್ ನಾಯಕ್ ನಿಧಿಯಿಂದ ಬಿಡುಗಡೆಯಾದ ರೂ 10 ಲಕ್ಷ ಅನುದಾನದಲ್ಲಿ ಇಲ್ಲಿನ ಹರಿಶ್ಚಂದ್ರಪುರದ ಮುಸ್ಲಿಮರ ಸ್ಮಶಾನ ತಡೆಗೋಡೆ ನಿರ್ಮಾಣಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಅಕ್ಬರ್ ಚಾಲನೆ ನೀಡಿದರು.

10 ಲಕ್ಷ ವೆಚ್ಚದಲ್ಲಿ ಸುಮಾರು 200 ಮೀಟರ್ ವಿಸ್ತ್ರೀರ್ಣದ ತಡೆಗೋಡೆ ನಿರ್ಮಾಣವಾಗುತ್ತಿದೆ ಎಂದು ಗ್ರಾ.ಪಂ. ಸದಸ್ಯ ಕಲೀಮುಲ್ಲಾ ಮಾಹಿತಿ ನೀಡಿದರು.

ಈ ಸಂದರ್ಭ ವಿವಿಧ ಪ್ರಮುಖರಾದ ಬಿ.ಎನ್ ಪ್ರಕಾಶ್, ಜೆ.ಕೆ ಸೋಮಣ್ಣ, ಮುರುಗಾ, ರಾಜಶೇಖರ್, ಅನೀಫಾ ಮಸೀದಿಯ ಅಧ್ಯಕ್ಷ ಆಸೀಫ್, ಉಪಾಧ್ಯಕ್ಷ ಮುಕ್ತಾರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ ಬಾಬು, ನಗರ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕುಟ್ಟಪ್ಪ, ಜಿಲ್ಲಾ ಕಾಂಗ್ರಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮ್ಮದ್ ಇದ್ದರು.