ಮಡಿಕೇರಿ, ಮಾ. 12: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳ ವಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಪಳ್ಳಿಪುರ ಭರತ್ ಕುಮಾರ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉಗ್ರಾಣಿ ದಾಮೋದರ್, ಕಾರ್ಯದರ್ಶಿಯಾಗಿ ಜಾಲಮೂಲೆ ಮಧುಸೂದನ್, ಖಜಾಂಚಿಯಾಗಿ ಪಳ್ಳಿಪುರ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಬಂಗಾಡು ಸುರೇಂದ್ರ, ಮಠದ ಮನೆ ಸದಾನಂದ, ಕೋಟೆಮನೆ ಮುಖೇಶ್, ಶಶಿಹಿತ್ಲು ಸತೀಶ್, ಮೂಲೆ ಅಂಗಡಿ ಪವಿತ್ರ, ನಿಧಿಯಡ್ಕ ಕೃಷ್ಣ, ದೊಡ್ಮನೆ ರಾಜೇಶ್, ಜಾಲಮೂಲೆ ಪ್ರಶಾಂತ್, ಕಟ್ಟೆಮನೆ ರಮೇಶ್, ಬಂಗಾಡು ಸ್ವರೂಪ್, ಜಾಲಮೂಲೆ ಪ್ರದೀಪ್, ಅಪ್ಪಚಡ ಮಹೇಂದ್ರ, ಪಂಜಿಪಳ್ಳ ಪ್ರಭಾಕರ್ ನೇಮಕಗೊಂಡಿದ್ದಾರೆ.