ಮಡಿಕೇರಿ, ಮಾ. 12: ಇತ್ತೀಚೆಗೆ ಕರಡ ಗ್ರಾಮದ ಕಲ್ಚರಲ್ ಕ್ಲಬ್‍ನಲ್ಲಿ ಸಿಎನ್‍ಸಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನಜಾಗೃತಿ ಸಭೆ ನಡೆಯಿತು. ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಕೊಡವರ ಹಕ್ಕುಗಳಿಗೆ ಸಂವಿಧಾನ ಬದ್ಧತೆ ನೀಡಬೇಕೆಂದು ಆಗ್ರಹಿಸಿದರು.

ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನದೊಂದಿಗೆ ಸರಕಾರದಿಂದ ವಿಶೇಷ ಸವಲತ್ತುಗಳನ್ನು ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗುವಂತೆ ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಬೇಪಡಿಯಂಡ ಕುಟುಂಬದ ದಿನು, ಶಾಂತು, ರವಿ, ಸತೀಶ್, ಬಿದ್ದಪ್ಪ ನೆರ್ಪಂಡ ಗಾಂಧಿ, ಸಂಪತ್, ಶುಷ, ಜಿಮ್ಮಿ ಹಾಗೂ ಪಟ್ರಪಂಡ ಬೋಪಯ್ಯ, ಕುಟ್ಟಪ್ಪ, ಚಂಗಂಡ ಕಿಶು, ಐತಿಚಂಡ ಭೀಮಯ್ಯ, ಸುಧ, ಪ್ರಕಾಶ್, ನಡಿಕೇರಿಯಂಡ ಚಂಗಪ್ಪ, ಸೋಮಯ್ಯ ಮುಂತಾದವರು ಭಾಗವಹಿಸಿದ್ದರು.