*ಗೋಣಿಕೊಪ್ಪಲು, ಮಾ. 12: ಜೆ.ಸಿ.ಐ. ನಿಸರ್ಗ ಪೊನ್ನಂಪೇಟೆಯ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಯನ್ನು ಪೊನ್ನಂಪೇಟೆಯ ಸಮುದಾಯ ಭವನದಲ್ಲಿ ನಡೆಸಲಾಯಿತು.ತಾ.ಪಂ. ಸದಸ್ಯೆ ಆಶಾ ಪೂಣಚ್ಚ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ದೇಶದ ಪ್ರಗತಿಗೆ ಮಹಿಳೆ Éಯರ ಪಾತ್ರ ಬಹುಮುಖ್ಯ ಎಂದು ಆಶಾ ಪೂಣಚ್ಚ ಅಭಿಪ್ರಾಯಪಟ್ಟರು.ಜೆ.ಸಿ.ಐ. ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಮಾತನಾಡಿ, ಮಹಿಳೆಯರು ಸ್ವಾವಲಂಬ ಬದುಕು ನಡೆಸಬೇಕು. ಯಾರ ಆಶ್ರಯದ ಹಂಗಿನಲ್ಲಿ ಬದುಕದೆ ಸ್ವಯಂ ಉದ್ಯೋಗ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ತಾಲೂಕು ಯುವ ಒಕ್ಕೂಟದ ಸಣ್ಣುವಂಡ ನಂದಾ ಮುತ್ತಣ್ಣ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹಿಳೆಯರ ಆದರ್ಶವನ್ನು ಪಾಲಿಸಬೇಕು ಎಂದು ತಿಳಿಸಿದರು.

ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚೀರಂಡ ಜ್ಯೋತಿ ಪೊನ್ನಪ್ಪ, ಸದಸ್ಯರುಗಳಾದ ಅಮಿತಾ ವೆಂಕಟೇಶ್ ಹಾಜರಿದ್ದರು.