ಕುಶಾಲನಗರ, ಮಾ, 13: ತುರ್ತು ಕಾಮಗಾರಿ ನಿಮಿತ್ತ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ನೆಹರು ತಿಳಿಸಿದ್ದಾರೆ. ನಿಸರ್ಗಧಾಮದ ಒಳಭಾಗದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಮುಂದಿನ 10 ದಿನಗಳ ಕಾಲ ಈ ನಿಷೇಧ ಮುಂದುವರೆಯಲಿದೆ. ಪ್ರವಾಸಿಗರು ಈ ನಿಟ್ಟಿನಲ್ಲಿ ಸಹಕರಿಸುವಂತೆ ಅವರು ಕೋರಿದ್ದಾರೆ.

ದುಬಾರೆ ಅರಣ್ಯ ವಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಗ್ನಿ ಅನಾಹುತಗಳು ನಡೆಯುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ. ದುಬಾರೆ ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕ್ಷೀಣಿಸಿದ ದೃಶ್ಯ ಗೋಚರಿಸಿದ್ದು ಮೋಟಾರು ಬೋಟುಗಳ ಸಂಚಾರ ಕೂಡ ರದ್ದುಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.