ಸೋಮವಾರಪೇಟೆ, ಮಾ. 13: ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ ಮೇ 9ರಂದು ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಜೆ 6 ಗಂಟೆಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಬಿ. ಎಸ್. ಮನೋಹರ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನ ದಲ್ಲಿ ಆಯೋಜಿಸಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ಸೋಮವಾರಪೇಟೆಯಲ್ಲಿ ವಿಶೇಷ ಹಾಗೂ ವಿನೂತನ ಮಾದರಿಯಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯು ತ್ತಿದ್ದು, ಹೆಸರಾಂತ ಹಿನ್ನೆಲೆ ಗಾಯಕರು ಗಳಾದ ಜೋಗಿ ಖ್ಯಾತಿಯ ಸುನಿತ, ಶ್ರೀನಿವಾಸ್ ಹಾಗೂ ಸರಿಗಮಪದ ವಿಜೇತ ಚೆನ್ನಪ್ಪ ಮತ್ತು ಮಜಾ ಟಾಕೀಸ್ ಖ್ಯಾತಿಯ ರೆಮೋ ಅವರನ್ನೊಳಗೊಂಡ ಹೆಸರಾಂತ ವಾದ್ಯಗೋಷ್ಠಿ ತಂಡದಿಂದ ಕಾರ್ಯಕ್ರಮ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ವಲಯ ನಿರ್ದೇಶಕ ಕೆ.ಜೆ.ಗಿರೀಶ್, ಜೇಸಿ ಸಂಸ್ಥೆಯ ಕಾರ್ಯದರ್ಶಿ ರುಬಿನಾ, ಮಹಿಳಾ ಘಟಕದ ಅಧ್ಯಕ್ಷೆ ಮೀನಾ ಮಂಜುನಾಥ್, ಪದಾಧಿಕಾರಿಗಳಾದ ಕೆ.ಎ.ಪ್ರಕಾಶ್, ಎಂ.ಎಂ.ಪ್ರಕಾಶ್ ಉಪಸ್ಥಿತರಿದ್ದರು.