* ನಾಪೋಕ್ಲು, ಮಾ. 13: ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದು ವೈಭವಯುತವಾಗಿ ನಡೆಯಿತು.

ಬೆಳಿಗ್ಗೆ ಗಣಪತಿಹೋಮ, ಪುನರ್ವಸು ನಕ್ಷತ್ರ ಮೀನಲಗ್ನ ಶುಭಮುಹೂರ್ತದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ, ಉಪದೇವರು ಗಳಾದ ಶ್ರೀ ಶಾಸ್ತಾವು, ಪಂಚಲಿಂಗ, ವರಾಹಿ, ಪುನರ್‍ಪ್ರತಿಷ್ಠೆ ಜೀವಕಲಶಾಭಿಷೇಕ ನಡೆದು ನಡೆಯಿತು. ಪ್ರತಿಷ್ಠಾ ಬಲಿ, ಮಧ್ಯಾಹ್ನ ಪೂಜೆ ಅನ್ನಸಂತರ್ಪಣೆ ನಡೆಯಿತು. ನಿತ್ಯ ನೈಮಿತ್ತಿಕಾದಿ ನಿರ್ಣಯ ನಿಶ್ಚಯಿಸಿ, ಭದ್ರದೀಪ ಇಟ್ಟು ಕವಾಟ ಬಂಧನ, ಮಂಟಪ ದಲ್ಲಿ ಪೂಜೆ ತ್ರಿಕಾಲ ಪೂಜೆ, ಅಂಕುರಪೂಜೆ ನೆರವೇರಿತು. ಶ್ರೀ ದುರ್ಗಾಮಾತಾ ಭಜನಾ ಸಂಘ ಅರಂತೋಡು ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪವಿತ್ರಪಾಣಿ ಕುಮಾರಸ್ವಾಮಿ ಬೈಪಾಡಿತ್ತಾಯ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯಾಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್‍ಕುಮಾರ್ ಉಳುವಾರು, ದೇವಳದ ಕಾರ್ಯನಿರ್ವಾಹಣಾಧಿ ಕಾರಿ ಹರೀಶ್ಚಂದ್ರ, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಮೇದಪ್ಪ, ಕೃಷ್ಣಬೈಪಾಡಿತ್ತಾಯ, ಕೃಪಾಶಂಕರ ತುಡಿಯಡ್ಕ,ಕೆ.ಆರ್ ಗಂಗಾಧರ, ದೇವಳದ ವ್ಯವಸ್ಥಾಪಕರಾದ ಆನಂದ ಕಲ್ಲಗದ್ದೆ, ಕೆ.ಕೆ ನಾರಾಯಣ ಎಸ್.ಪಿ ಲೋಕನಾಥ, ನಾಗಪ್ಪ ಗೌಡ ಬಾಳೆಕಜೆ, ಜನಾರ್ದನ ಬಾಳೆಕಜೆ ಭಕ್ತಾಧಿಗಳು ಉಪಸ್ಥಿತರಿದ್ದರು.