ಮಡಿಕೇರಿ, ಮಾ. 15: 2016-17ನೇ ಸಾಲಿನ ಮಾದಾಪುರ ವಲಯ ಮಟ್ಟದ ಕಲಿಕೋತ್ಸವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರಗಂದೂರಿನ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ತೋರಿದ್ದಾರೆ.

ಓದುವದರಲ್ಲಿ ನಿಝಾಮುದ್ದೀನ್, ಸಮ್ನ, ಬರೆಯುವದರಲ್ಲಿ ವರ್ಷಿತ, ಅಘ್ನ ತಸ್ನೀಮ, ಮಾನ್ಯ, ಸೈಮ, ಅಭಿವ್ಯಕ್ತಿ, ಭಾಷಣದಲ್ಲಿ ಝಿಯಾನ, ಸುಜಿತ್, ಹರ್ಷಿತ್ ಕುಮಾರ್, ಸುನೈನ, ಅಕ್ಷಯ, ದೀಪ್ತಿ ಪ್ರಥಮ ಬಹುಮಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಯಮ್ಮಕುಲ್ಸು, ಸಫೀಜಾ, ತ್ರಾಸೀಮ, ಹರ್ಷಿತ ದ್ವಿತೀಯ ಸ್ಥಾನ ಪಡೆದರು.

ಹೆಬ್ಬಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಷಣದಲ್ಲಿ ದೀಪ್ತಿ ಪ್ರಥಮ ಹಾಗೂ ಬರಹದಲ್ಲಿ ಸೈಮ ಪ್ರಥಮ ಸ್ಥಾನಗಳಿಸಿದ್ದಾರೆ. ಓದುವದರಲ್ಲಿ ಸಮ್ನ ದ್ವಿತೀಯ ಹಾಗೂ ಅಭಿವ್ಯಕ್ತಿಯಲ್ಲಿ ಝೊಯಾನ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.