ಗೋಣಿಕೊಪ್ಪಲು, ಮ. 15: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರೂ. 10 ಲಕ್ಷ ಅನುದಾನದಲ್ಲಿ ತಿತಿಮತಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜಾ ಉದ್ಘಾಟಿಸಿದರು.

ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮಾತನಾಡಿ, 200 ರೂಪಾಯಿ ನೀಡಿ ಕಾರ್ಡ್ ಪಡೆದುಕೊಂಡು ಘಟಕವನ್ನು ಉಪಯೋಗಿಸಿಕೊಳ್ಳಬೇಕು. ಒಂದು ಬಾರಿಗೆ 20 ಲೀಟರ್ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಶಾಂತಮ್ಮ, ರೇಣುಕಾ, ಪೊನ್ನು, ಅನೂಪ್, ಸಿದ್ದರಾಜು, ಚುಬ್ರು ಪಿಡಿಓ ಚೇಂದಿರ ಎಂ ಲೋಕನಾಥ್, ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ವಿನಯ್ ಕುಮಾರ್, ಮಹಿಳಾ ಸಮಾಜದ ಅಧ್ಯಕ್ಷೆ ಜಯಮ್ಮ, ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಇದ್ದರು.