ಗುಡ್ಡೆಹೊಸೂರು, ಮಾ. 15: ಕೊಡಗು ಜಿಲ್ಲಾ ಪರ್ತಕರ್ತರ ಸಂಘದ ವತಿಯಿಂದ ಹೈದರಾಬಾದ್‍ಗೆ ಪ್ರವಾಸ ಕೈಗೊಳ್ಳಲಾಗಿದೆ. ಜಿಲ್ಲಾ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್‍ಕುಟ್ಟಪ್ಪ ಅವರ ನೇತೃತ್ವದಲ್ಲಿ ಪ್ರವಾಸ ಆರಂಭಿಸಲಾಯಿತು.

ಮಡಿಕೇರಿ ಕೋಟೆ ಆವರಣ ದಿಂದ ಹೊರಟ ಪತ್ರಕರ್ತರಿಗೆ ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್, ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ಅವರುಗಳು ಶುಭ ಹಾರೈಸಿ, ಬೀಳ್ಕೊಟ್ಟರು. 40 ಮಂದಿ ಪತ್ರಕರ್ತರು ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ.