ಗೋಣಿಕೊಪ್ಪಲು, ಮಾ. 14: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕೆಮಾಳ, ಅಡುಗುಂಡಿ, ಅಯಿರಸುಳಿ ಮತ್ತು ಜಂಗಲ್ ಹಾಡಿಯ ಒಟ್ಟು 39 ಕುಟುಂಬಗಳಿಗೆ ಜಿ.ಪಂ ಸದಸ್ಯೆ ಪಿ.ಆರ್. ಪಂಕಜ ಹಕ್ಕುಪತ್ರ ವಿತರಿಸಿದರು.

ನಂತರ ಮಾತನಾಡಿದ ಅವರು, ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಹಾಡಿ ಜನರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆದು ಹಕ್ಕುಪತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಿತರ ಹಾಡಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಅಕ್ಕೆಮಾಳ 13, ಅಡುಗುಂಡಿ 15, ಆಯಿರಸುಳಿ 2 ಹಾಗೂ ಜಂಗಲ್ ಹಾಡಿಯ 9 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮಾಹಿತಿ ನೀಡಿದರು. ಈ ಸಂದರ್ಭ ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್, ಸದಸ್ಯರಾದ ಚುಬ್ರು, ಅನೂಪ್, ರೇಣುಕಾ, ಬಸವಮ್ಮ, ಸಣ್ಣಯ್ಯ, ರಾಣಿ, ಸಿದ್ದರಾಜ್, ಶಾಂತಮ್ಮ, ತಾ.ಪಂ ಸದಸ್ಯೆ ಆಶಾ ಜೇಮ್ಸ್ ಪಿಡಿಓ ಚೇಂದಿರ ಎಂ. ಲೋಕನಾಥ್ ಇದ್ದರು.