ಮಡಿಕೇರಿ, ಮಾ. 16: ಕೊಡಗಿನ ಗಡಿ ಮಾಕುಟ್ಟ ವ್ಯಾಪ್ತಿಯ ಕಾರೆತೋಡು ಶ್ರೀ ಭಗವತಿ ಜಾತ್ರೆ ಸಂದರ್ಭ, ತಾ. 15ರಂದು ಜೂಜಾಡುತ್ತಿದ್ದ 16 ಮಂದಿಯನ್ನು ಅಪರಾಧ ಪತ್ತೆದಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಎಂ. ಮಹೇಶ್ ಹಾಗೂ ಸಿಬ್ಬಂದಿ ಧಾಳಿ ನಡೆಸಿ ಆರೋಪಿಗಳೊಂದಿಗೆ ನಗದು ರೂ. 55980 ವಶಪಡಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.