ಮಡಿಕೇರಿ, ಏ. 1: ಚೇರಂಬಾಣೆ ಬೇಂಗೂರು ಗ್ರಾಮ ಪಂಚಾಯಿತಿಗೊಳಪಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಎಸ್.ಎಸ್.ಎಫ್. ಚೇರಂಬಾಣೆ ಶಾಖೆ ವತಿಯಿಂದ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಇತ್ತೀಚೆಗೆ ನೆರವೇರಿಸಲಾಯಿತು.

ಪಂಚಾಯಿತಿ ಸದಸ್ಯ ಕೇಕಡ ಎಂ. ಸುಗುಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಎಸ್.ಎಫ್. ಶಾಖಾ ಅಧ್ಯಕ್ಷ ಮಹಮ್ಮದ್ ಶರೀಫ್ ಅಜ್‍ಹರಿ ಸ್ವಾಗತಿ ಭಾಷಣ ಮಾಡಿದರು. ಮಾಜಿ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಯಮುನ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶಿಬಿರದ ಸದುಪಯೋಗವನ್ನು 125 ಜನರು ಪಡೆದುಕೊಂಡರು. ಅದರಲ್ಲಿ 55 ವ್ಯಕ್ತಿಗಳಿಗೆ ಕನ್ನಡಕಗಳನ್ನು ನೀಡಲು ತೀರ್ಮಾನಿಸಿದರು. ಶಾಖಾ ಕಾರ್ಯದರ್ಶಿ ಜಾಫರ್ ಶರೀಫ್ ವಂದಿಸಿದರು.