ಮಡಿಕೇರಿ, ಏ. 1: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಯುವ ಸಪ್ತಾಹ ಹಾಗೂ ಗ್ರಾಮೀಣ ಕ್ರೀಡಾಕೂಟ ಗಾಳಿಬೀಡುವಿನ ಚಪ್ಪಂಡ ಕೆರೆಯಲ್ಲಿ ನಡೆಯಿತು.

ನೆಹರೂ ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಗಾಳಿಬೀಡುವಿನ ಚಪ್ಪಂಡಕೆರೆ ಸ್ನೇಹಿತರ ಯುವಕ ಸಂಘದ ವತಿಯಿಂದ ನಡೆದ ಕಾರ್ಯಕ್ರಮವನ್ನು ಗ್ರಾ.ಪಂ. ಉಪಾಧ್ಯಕ್ಷೆ ಬಿ. ರಾಣಿ ಮುತ್ತಣ್ಣ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಟ್ಟಗೇರಿ ಸರಕಾರಿ ಶಾಲೆಯ ಅಧ್ಯಾಪಕ ಕೆ.ಕೆ. ಬಾಲಕೃಷ್ಣ ಮಾತನಾಡಿದರು. ಸ್ನೇಹಿತರ ಯುವಕ ಸಂಘದ ಮಾಜಿ ಅಧ್ಯಕ್ಷ ಕೊಂಬಾರನ ಜೆ. ಕಾವೇರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯ ಎಂ.ಡಿ. ಸುಭಾಷ್ ಆಳ್ವ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಗಾಳಿಬೀಡು ದವಸ ಭಂಡಾರದ ಕಾರ್ಯದರ್ಶಿ ಕೆ.ಕೆ. ಗಣೇಶ್, ಶ್ರೀ ಮಾದೂರಪ್ಪ ಸ್ವಸಹಾಯ ಸಂಘದ ಅಧ್ಯಕ್ಷ ಕೆ.ಯು. ಕೇಶವಕುಮಾರ್, ತ್ರಿವೇಣಿ ಸ್ವ-ಸಹಾಯ ಸಂಘದ ಅಧ್ಯಕ್ಷೆ ಬಿ.ಸಿ. ಪೂವಮ್ಮ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಗ್ರಾಮೀಣ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದ ಗ್ರಾಮಸ್ಥರಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ಕೆ.ಇ. ವರಿಷ್ಮ ಹಾಗೂ ಕೆ.ಕೆ. ಲಿಖಿತ ಪ್ರಾರ್ಥಿಸಿದರು. ಸ್ನೇಹಿತರ ಯುವಕ ಸಂಘದ ಅಧಕ್ಷ ಕೆ.ಎ. ಮೋಹನ್ ಸ್ವಾಗತಿಸಿ, ಕೆ.ಕೆ. ಮದನ್ ವಂದಿಸಿದರು.