ವೀರಾಜಪೇಟೆ, ಏ. 1: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೈಯಲ್ಪಟ್ಟ ಕಾಸರಗೋಡಿನ ಮದರಸಾ ಶಿಕ್ಷಕ ರಿಯಾಝ್ ಮೌಲವಿ ಅವರ ಹೊದವಾಡ ಆಝಾದ್ ನಗರದಲ್ಲಿರುವ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯಾಧ್ಯಕ್ಷ ಎಂ.ಐ. ಅಬ್ದುಲ್ ಅಝೀಝ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಾಮಾಜಿಕ ವಾತಾವರಣವನ್ನು ಕಲುಷಿತಗೊಳಿಸುವ ಸಮಾಜದ್ರೋಹಿ ಶಕ್ತಿಗಳ ಬಗ್ಗೆ ಸರಕಾರ ಕ್ರಮವಹಿಸುವ ಅಗತ್ಯವಿದೆ. ರಿಯಾಝ್ ಮೌಲವಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದರು

ಈ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಹಾಬ್ ಪೂಕೋಟೂರ್, ಸೋಲಿಡಾರಿಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸಾದಿಕ್, ಎಸ್.ಐ.ಓ. ರಾಜ್ಯ ಕಾರ್ಯದರ್ಶಿ ತೌಫೀಖ್, ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲಾ ಸಂಚಾಲಕ ಸಿ.ಹೆಚ್. ಅಫ್ಸರ್, ವೀರಾಜಪೇಟೆ ಸ್ಥಾ&divound;ೀಯ ಅಧ್ಯಕ್ಷ ಕೆ.ಪಿ.ಕೆ.ಮೊಹಮ್ಮದ್ ಹಾಜರಿದ್ದರು.