ಮಡಿಕೇರಿ, ಏ. 3: ರಾಷ್ಟ್ರಾದ್ಯಂತ ಲಾರಿ ಮುಷ್ಕರದ ಬಿಸಿ ತಟ್ಟಿದ್ದು, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಪ್ರಮುಖವಾಗಿ ತೈಲ ಹಾಗೂ ಅನಿಲ ಪೂರೈಕೆ ವಾಹನಗಳು ಸಂಚರಿಸದ ಹಿನ್ನೆಲೆಯಲ್ಲಿ ದೇಶಾದ್ಯಂತ ಅನಿಲ ಹಾಗೂ ತೈಲ ಕೊರತೆ ಕಂಡು ಬರುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಆ ರೀತಿಯ ಯಾವದೇ ಕೊರತೆ ಕಂಡು ಬಂದಿಲ್ಲ. ಅಗತ್ಯವಿರುವಷ್ಟು ತೈಲ, ಅನಿಲ ಪೂರೈಕೆಯಾಗುತ್ತಿರುವದಾಗಿ ತೈಲ ವಿತರಕರು ಹೇಳುತ್ತಾರೆ. ಪರಿಸ್ಥಿತಿ ಬಿಗಡಾಯಿಸಿದಲ್ಲಿ ಸಮಸ್ಯೆ ತಲೆದೋರಬಹುದೆಂದು ಹೇಳುತ್ತಾರೆ.