ಮಡಿಕೇರಿ, ಏ. 2: ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜ ಅವರು ತಾ. 4 ರಂದು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘÀಟನೆಯ ಜಿಲ್ಲಾ ಸಂಯೋಜಕÀ ತೆನ್ನಿರ ಮೈನ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 10 ಗಂಟೆಗೆ ಬೇಳೂರು, 11.30ಕ್ಕೆ ಕೂಡಿಗೆ, ಮಧ್ಯಾಹ್ನ 2.30ಕ್ಕೆ ಚೆಟ್ಟಳ್ಳಿ, ಸಂಜೆ 4 ಗಂಟೆಗೆ ಮದೆನಾಡು ಹಾಗೂ 5.30ಕ್ಕೆ ಚೆಂಬು ಗ್ರಾಮದಲ್ಲಿ ಚುನಾಯಿತ ಮತ್ತು ಪರಾಜಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಇವರೊಂದಿಗೆ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಾಜಿರಾವ್ ಕಾಡೆ, ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್, ರಾಜ್ಯ ವಲಯ ಸಂಯೋಜಕ ರಂಗಸ್ವಾಮಿ, ಜಿಲ್ಲಾ ಕಾಂಗ್ರೆಸ್‍ನ ಮುಖಂಡರುಗಳು ಹಾಗೂ ಸಂಘÀಟನೆಯ ಸಂಯೋಜಕರು ಹಾಜರಿರುತ್ತಾರೆ ಎಂದು ಅವರು ಹೇಳಿದ್ದಾರೆ.