ಮಡಿಕೇರಿ, ಏ. 2: ಗೋಣಿಕೊಪ್ಪಲಿನ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿ ಅಕಾಲಿಕ ದುರ್ಮರಣಕ್ಕೀಡಾದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನ ಗಾಂಧಿನಗರದ ನಿವಾಸಿಯೊಬ್ಬರ ಪುತ್ರ ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಿ. ಪೂಜಿತ್ ಎಂಬಾತನೇ ದುರ್ಮರಣಕ್ಕೀಡಾದ ವಿದ್ಯಾರ್ಥಿಯಾಗಿದ್ದಾನೆ.

ಇತ್ತೀಚೆಗೆ ಈತ ಗಾಂಧಿನಗರದಲ್ಲಿ ತನ್ನ ಸಹೋದರಿಯೊಂದಿಗೆ ಮಸಾಲೆ ದೋಸೆ ತಿನ್ನಲೆಂದು ಮನೆಯಿಂದ ಹೊರ ತೆರಳಿದ್ದು, ದಾರಿಯಲ್ಲಿ ಸಾಗುತ್ತಿದ್ದಾಗ ಒಣಗಿದ ಮರದ ದೊಡ್ಡ ಕೊಂಬೆಯೊಂದು ತಲೆಗೆ ಬಿದ್ದು, ತೀವ್ರ ಗಾಯಗೊಂಡ ಬಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ.