ಮಡಿಕೇರಿ, ಏ. 2: ನಗರದ ಕೈಗಾರಿಕಾ ಬಡಾವಣೆಯ ಮೊಬೈಲ್ ಅಂಗಡಿಯಲ್ಲಿ ಜುಬೇರ್ ಎಂಬವರ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಗಿಲ್ಲಿ ಅಲಿಯಾಸ್ ದರ್ಶನ್, ಪ್ರಶಾಂತ್ ಹಾಗೂ ಅಭಿಲಾಷ್ ಬಂಧಿತ ಆರೋಪಿಗಳೆಂದು ತಿಳಿಸಿರುವ ಪೊಲೀಸ್ ವೃತ್ತ ನಿರೀಕ್ಷಕ ಮೇದಪ್ಪ ಅವರು ಇತರರ ಬಂಧನಕ್ಕೆ ಮುಂದಾಗಿರುವದಾಗಿಯೂ ಸುಳಿವು ನೀಡಿದ್ದಾರೆ.