ವೀರಾಜಪೇಟೆ, ಏ. 2: ಮಾಯಮುಡಿ ಬಳಿಯ ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೋಹನ್ (62) ಎಂಬವರಿಗೆ ಗೂಳಿಯೊಂದು ತಿವಿದು ಗಂಭೀರ ಸ್ವರೂಪದ ಗಾಯಗಳಿಂದ ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಮಾ. 30 ರಂದು ಅಪರಾಹ್ನ ಮೋಹನ್‍ಗೆ ಗೂಳಿ ತಿವಿದಿದ್ದು, ಈ ವೇಳೆ ಎಡದ ಕೈ ಹಾಗೂ ಎಡದ ತೊಡೆಯ ಭಾಗಕ್ಕೆ ಗಾಯಗಳಾಗಿವೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರು ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ಗಾಯಾಳು ಪ್ರಾಣಾಪಾಯದಿಂದ ಪಾರಾಗಿರುವದಾಗಿ ವೈದ್ಯರು ತಿಳಿಸಿದ್ದಾರೆ.