ಮಡಿಕೇರಿ, ಏ. 2: ಪೊಲೀಸ್ ಧ್ವಜ ದಿನಾಚರಣೆ ಸಂದರ್ಭ ವರ್ಷಂಪ್ರತಿ ನೀಡಲಾಗುವ ಫೀ.ಮಾ. ಕಾರ್ಯಪ್ಪ ಟ್ರೋಫಿಗೆ ಈ ಬಾರಿ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಸಿಬ್ಬಂದಿ ಕೆ.ಎ. ಅಬ್ದುಲ್ ಮಜೀದ್ ಭಾಜನರಾಗಿದ್ದಾರೆ. ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ಕೆ.ಎಂ. ಅಹಮ್ಮದ್ ಹಾಗೂ ಸೈನಬ ದಂಪತಿಯ ಪುತ್ರರಾಗಿರುವ ಇವರು, ಬಿ.ಕಾಂ. ಪದವೀಧರರಾಗಿದ್ದು, ಕಳೆದ 15 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆಯಿಂದ 41 ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಕಾರ್ಯೋನ್ಮುಖರಾಗಿರುವ ಅಬ್ದುಲ್ ಮಜೀದ್, ಇದುವರೆಗೆ ಇಲಾಖೆಯಿಂದ ವಿವಿಧ ಸಂದರ್ಭ 26 ಬಾರಿ ಪುರಸ್ಕಾರ ಪಡೆದಿದ್ದಾರೆ.