ಮಡಿಕೇರಿ, ಏ. 2: ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಕೆಲವು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಿದ್ದು, ಇದು ಸ್ವಾಗತಾರ್ಹವೆಂದು ಕೊಡಗು ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ ಸಿಂಹ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊಸದುರ್ಗ, ಕೇರಳದ ಪಾಣತ್ತೂರು, ಕೊಡಗಿನ ಭಾಗಮಂಡಲ ಮತ್ತು ಮಡಿಕೇರಿ ವರೆಗಿನ 53 ಕಿ.ಮೀ. ದೂರದ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಲಿದ್ದು, ಈ ಯೋಜನೆಯನ್ನು ಘೋಷಿಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಕ್ರಮ ಸ್ವಾಗತಾರ್ಹವೆಂದು ಅಭಿಪ್ರಾಯಪಟ್ಟಿದ್ದಾರೆ.