ಮಡಿಕೇರಿ, ಏ. 4: ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮೋತ್ಸವ ಸಮಿತಿ ಹಾಗೂ ಶ್ರೀ ಓಂಕಾರೇಶ್ವರ ದೇವಸ್ಥಾನದ ವತಿಯಿಂದ ತಾ. 5 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಡಿಕೇರಿ ಶಿವಶಕ್ತಿ ಮಹಿಳಾ ವೃಂದದಿಂದ ಶ್ರೀ ರಾಮ ರಕ್ಷಸ್ತ್ರೋತ್ರ ಮತ್ತು ಭಗವದ್ಗೀತೆ ಪಠಣ ನಡೆಯಲಿದೆ. ಸಂಜೆ 6.30 ಗಂಟೆಗೆ ವಿದುಷಿ ಪುತ್ತೂರಿನ ಸುಚಿತ್ರ ಹೊಳ್ಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಹರಿಕಥಾ ಪ್ರಸಂಗಶ್ರೀ ರಾಮೋತ್ಸವ ಸಮಿತಿ ಹಾಗೂ ಶ್ರೀ ಓಂಕಾರೇಶ್ವರ ದೇವಸ್ಥಾನ ವತಿಯಿಂದ ಶ್ರೀ ರಾಮನವಮಿ ಪ್ರಯುಕ್ತ ತಾ. 4 ರಂದು ಮೈಸೂರಿನ ಹರಿಕಥಾ ವಿದುಷಿ ವಸಂತಲಕ್ಷ್ಮಿ ಅವರಿಂದ ಹರಿಕಥಾ ಪ್ರಸಂಗ ನಡೆಯಿತು.