ಮಡಿಕೇರಿ, ಏ. 4: ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ಹಾಗೂ ಬಿ.ಕಾಂ. ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಗಾಯಕ ದೇವನಂದ್ ವರ ಪ್ರಸಾದ್ ಹಾಗೂ ತಂಡ ಜನಪದ ಗೀತೆಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳಿಗೆ ಜನಪದ ಸಂಸ್ಕøತಿಯ ಮಹತ್ವವನ್ನು ಪಸರಿಸಿದರು.

ಹಾಸನ, ಚಿಕ್ಕಮಗಳೂರು, ಮೈಸೂರು ಇನ್ನಿತರ ಜಿಲ್ಲೆಗಳ ಜನಪದ ಕಲಾವಿದರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಹಾಡುಗಾರರಾದ ಯಶವಂತ್ ಕುಮಾರ್, ಬಸವರಾಜು ಬಿ., ವಿಶ್ವನಾಥ್ (ಯುವ ಪ್ರತಿಭೆ ಪ್ರಶಸ್ತಿ ಪುರಸ್ಕøತರು), ಮೋಹನ್ ಕುಮಾರ್, ಸಚಿನ್, ಸರ್ವೇಶ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಯಾನಂದ, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.