ಗೋಣಿಕೊಪ್ಪಲು, ಏ. 5: ಮಾಸಿಕ ಪ್ರಗತಿ ಪರಿಶೀಲನಾ ಸಭೆ ರದ್ದಾಗಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡದ ಕಾರಣ ಅಧಿಕಾರಿಗಳು ಸಭೆಗೆ ಬಂದು ಹಿಂತಿರುಗಿದ ಘಟನೆ ಪೊನ್ನಂಪೇಟೆಯಲ್ಲಿ ನಡೆಯಿತು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ತಾ.ಪಂ. ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಇದರಂತೆ ತಂಡೋಪತಂಡವಾಗಿ ಅಧಿಕಾರಿಗಳಿಗೆ ಸಭೆ ರದ್ದಾಗಿದೆ ಎಂಬ ಮಾಹಿತಿ ಅರಿತು ಹಿಂತಿರುಗಿದರು.

ಕಚೇರಿ ಕೆಲಸದ ಒತ್ತಡದ ನಡುವೆ ಸಭೆಗೆಂದು ಬಂದ ಅಧಿಕಾರಿಗಳಿಗೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಾಬುರಾಮ್ ಜಗಜೀವನ್‍ರಾಂ ಜನ್ಮ ದಿನಾಚರಣೆ ಆಚರಣೆಗೆ ಪಾಲ್ಗೊಂಡ ಇಒ ಕಿರಣ ಪಡ್ನೇಕರ್ ಈ ಬಗ್ಗೆ ಅಧಿಕಾರಿಗಳು ಹಾಗೂ ಪಂಚಾಯ್ತಿ ಸದಸ್ಯರಿಗೆ ಮಾಹಿತಿ ನೀಡಿರಲಿಲ್ಲ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿತು.